ಪ್ರೇಮ ಪುಷ್ಟ


ಮಿಂಚು ಸಂಚರಿಸುವುದಂತೆ
ಬೆಂಕಿ ಆವರಿಸುವುದಂತೆ
ಬಿರುಗಾಳಿ ಬೀಸುವುದಂತೆ
ಸಮುದ್ರ ಉಕ್ಕುವುದಂತೆ
ಜಲಪಾತ ಧುಮ್ಮಿಕ್ಕುವುದಂತೆ
ಭುವಿ ಕಂಪಿಸುವುದಂತೆ
ಸಹಸ್ರಾರ ಸಿಡಿಯುವುದಂತೆ
ಅಬ್ಬಬ್ಬಾ…
ಏನೆಲ್ಲಾ ಕಲ್ಪನೆಗಳು ಒಂದು
ಸಮಾಗಮದ ಹಿಂದೆ
ಹುಸಿಗೆ ಹಿರಿದಾದ ಅಲಂಕಾರ?!

ಆ ಕಾಮನೆಂಬುವವನು
ಬಲಹೀನನೇ ಇರಬೇಕು!
ಬೆದರು ಬೊಂಬೆಗೆ
ಹುಲ್ಲು ತುಂಬಿದ ಹಾಗೆ
ಅವನಿಗೆ ಉಸಿರು ತುಂಬಬೇಕು

ಉಸಿರು ತುಂಬಿ
ಸಜೀವಗೊಳಿಸಬೇಕು
ಅಷ್ಟು ಮಾಡಿದರೂ
ಎಷ್ಟು ಹೊತ್ತು ತಾನೆ ಉಳಿಯಬಲ್ಲ?

ಕಾಮನಬಿಲ್ಲಿನ ಹಾಗೆ
ಇದ್ದ ಎನ್ನುವಷ್ಟರಲ್ಲಿ ಇಲ್ಲ!


ತಂಗಾಳಿಯ ಅಲೆಯೊಳಗೆ
ತೇಲಿ ಬರುತಿದೆ ಪ್ರೇಮ ಪುಷ್ಪ
ಪರಿಮಳಕೆ ಪಕ್ಕಾಗಿ
ನವಿರಾಗಿ ಕಂಪಿಸುತಿದೆ
ಮಿಡಿನಾಗರ

ಪರಮ ಪರಿಮಳದ ಹೂವು
ಕಣ್ಣಿಗೆ ಕಾಣಿಸದು
ಬಣ್ಣನೆಗೂ ಸಿಗದು
ಜೀವ ಅರಳುತಿದೆ
ದೇಹ ಹೊರಳುತಿದೆ

ಓ ಪ್ರೇಮ ಪುಷ್ಪವೇ
ವಿವಶಳಾಗಿಹೆನು
ನಿನಗೆ ನನ್ನನ್ನೇ
ಕೊಟ್ಟು-ಕೊಳ್ಳುವನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿಲುಗರಿ – ೩
Next post ಸ್ವಂತಿಕೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys